ಲಕ್ಷ್ಮೀಪೂಜೆ

ಲಕ್ಷ್ಮೀಪೂಜೆ


ಕೊಜಾಗರಿ ಹುಣ್ಣಿಮೆಯಂದು ಲಕ್ಷ್ಮೀ ಮತ್ತು ಇಂದ್ರ ದೇವತೆಗಳ ಪೂಜೆಯನ್ನು ಮಾಡಬೇಕೆಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ, ಮತ್ತು ಈ ಅಮಾವಾಸ್ಯೆಯಂದು ಲಕ್ಷ್ಮೀ ಮತ್ತು ಕುಬೇರರ ಪೂಜೆಯನ್ನು ಹೇಳಲಾಗಿದೆ. ಲಕ್ಷ್ಮೀ ಸಂಪತ್ತಿಯ ದೇವತೆಯಾದರೆ, ಈ ಸಂಪತ್ತನ್ನು ಸಂಗ್ರಹಿಸುವ ದೇವತೆ ಕುಬೇರೆ. ಅನೇಕರಿಗೆ ಧನ ಸಂಪತ್ತನ್ನು ಸಾಧಿಸುವ ಕಲೆಗಳು ಕರಗತವಾಗಿವೆ, ಆದರೆ ಆ ಸಂಪತ್ತಿನ ಸದುಪಯೋಗದಲ್ಲಿ ಅವರಿಗೆ ತಿಳುವಳಿಕೆ ಕಡಿಮೆ ಇರುತ್ತದೆ. ಧನಸಂಪತ್ತನ್ನು ರಕ್ಷಿಸುವುದು ಮತ್ತು ಅದರ ಯೋಗ್ಯ ವಿನ್ಯೋಗ ಅತ್ಯಂತ ಮಹತ್ವದ ವಿಷಯ. ಅದನ್ನು ಮನಬಂದಂತೆ ಉಪಯೋಗಿಸಿದರೆ ಸಂಪತ್ತು ನಮ್ಮ ಬಳಿ ಇರಲಾರದು. ಸಂಪತ್ತನ್ನು ಸದುಪಯೋಗ ಮಾಡುವುದು ಹೇಗೆ ಎಂದು ಕುಬೇರನು ಕಲಿಸುತ್ತಾನೆ. ಆದುದರಿಂದ ಎಲ್ಲರೂ, ವಿಶೇಷವಾಗಿ ವ್ಯಾಪಾರಿಗಳು ಲಕ್ಷ್ಮೀ ಕುಬೇರರ ಪೂಜೆಯನ್ನು ಶ್ರದ್ಧೆಯಿಂದ ಶಾಸ್ತ್ರೋಕ್ತವಾಗಿ ಮಾಡಬೇಕು.

‘ಪ್ರಾತಃಕಾಲದಲ್ಲಿ ಮಂಗಳಸ್ನಾನ ಮಾಡಿ ದೇವರಪೂಜೆ, ಮಧ್ಯಾಹ್ನ ಪಾರ್ವಣಶ್ರಾದ್ಧ ಹಾಗೂ ಬ್ರಾಹ್ಮಣಭೋಜನ ಮತ್ತು ಪ್ರದೋಷ ಕಾಲದಲ್ಲಿ ಬಳ್ಳಿಎಲೆಗಳಿಂದ ಶೃಂಗರಿಸಿದ ಮಂಟಪದಲ್ಲಿ ಲಕ್ಷ್ಮೀ, ವಿಷ್ಣು ಮತ್ತು ಕುಬೇರ ಮುಂತಾದವರ ಪೂಜೆಯೇ ಈ ದಿನದ ವಿಶೇಷವಾಗಿದೆ. ಈದಿನವೇ ವಿಷ್ಣುವು ಲಕ್ಷ್ಮೀ ಸಹಿತ ಎಲ್ಲ ದೇವತೆಗಳನ್ನು ಬಲಿಚಕ್ರವರ್ತಿಯ ಸೆರೆಮನೆಯಿಂದ ಮುಕ್ತಗೊಳಿಸಿದನು ನಂತರ ಎಲ್ಲ ದೇವತೆಗಳು ಹೋಗಿ ಕ್ಷೀರಸಾಗರದಲ್ಲಿ ವಿಶ್ರಾಂತಿ ಪಡೆದರು ಎನ್ನುವ ಕಥೆ ಇದೆ. ಅವರ ಪ್ರೀತ್ಯರ್ಥವಾಗಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿ ಎಲ್ಲ ಸುಖೋಪಭೋಗಗಳ ಉತ್ತಮ ವ್ಯವಸ್ಥೆ ಮಾಡಿ ಎಲ್ಲೆಡೆಯೂ ದೀಪಗಳನ್ನು ಹಚ್ಚಬೇಕೆಂದು ಹೇಳಲಾಗಿದೆ.

ಅಲಕ್ಷ್ಮೀ ನಿರ್ಮೂಲನೆ

ಒಳ್ಳೆಯ ಗುಣಗಳನ್ನು ವೃದ್ಧಿಸಿಕೊಳ್ಳಲು ಅಲ್ಲಿ ದೋಷಗಳು ಇರಬಾರದು, ಹಾಗಾದರೆ ಮಾತ್ರ ಅಲ್ಲಿ ಗುಣಗಳಿಗೆ ಮಹತ್ವ ಬರುತ್ತದೆ. ಇಲ್ಲಿ, ಲಕ್ಷ್ಮೀಪ್ರಾಪ್ತಿಯಾಲುಅಲಕ್ಷ್ಮೀಯನ್ನು ತೊಲಗಿಸಲೇಬೇಕು.ಈ ದಿನದಂದು ಹೊಸ ಕಸಬರಿಕೆಯನ್ನು ಖರೀದಿಸುತ್ತಾರೆ. ಅದಕ್ಕೆ ಲಕ್ಷ್ಮೀ ಎನ್ನುತ್ತಾರೆ. ಆ ಪೊರಕೆಯಿಂದ ನಡು ರಾತ್ರಿ ಕಸ ಗುಡಿಸಿ ಮೊರದಲ್ಲಿ ತುಂಬಿ ಹೊರಗೆ ಹಾಕಬೇಕು ಎಂದು ಹೇಳಲಾಗಿದೆ. ಇದಕ್ಕೆ ಅಲಕ್ಷ್ಮೀ (ಕಸ-ದಾರಿದ್ರ್ಯ) ನಿರ್ಮೂಲನೆ ಎನ್ನುತ್ತಾರೆ. ಸಾಮಾನ್ಯವಾಗಿ ಯಾವಾಗಲೂ ರಾತ್ರಿ ಕಸವನ್ನು ಗುಡಿಸುವುದಿಲ್ಲ ಅಥವಾ ಹೊರಗೆ ಹಾಕುವುದಿಲ್ಲ. ಈ ರಾತ್ರಿ ಮಾತ್ರ ಗುಡಿಸಬೇಕು. ಹಾಗೆ ಕಸ ಗುಡಿಸುವಾಗ ಮೊರ ಮತ್ತು ತಮ್ಮಟೆಗಳನ್ನು (ಚರ್ಮದ ವಾದ್ಯಗಳನ್ನು) ಬಾರಿಸಿ ಅಲಕ್ಷ್ಮೀಯನ್ನು ಓಡಿಸುತ್ತಾರೆ.

ಲಕ್ಷ್ಮೀದೇವಿಯು ತನ್ನ ವಾಸಕ್ಕೆ ಆರಿಸುವ ಸ್ಥಳ

ಆಶ್ವಯುಜ ಅಮಾವಾಸ್ಯೆಯ ರಾತ್ರಿ ಲಕ್ಷ್ಮೀಯು ಎಲ್ಲೆಡೆ ಸಂಚರಿಸಿ ತನ್ನ ನಿವಾಸಕ್ಕಾಗಿ ಯೋಗ್ಯಸ್ಥಾನವನ್ನು ಹುಡುಕುತ್ತಾಳೆ ಎಂದು ಪುರಾಣದಲ್ಲಿ ಹೇಳಲಾಗಿದೆ. ‘ಸ್ವಚ್ಛತೆ, ಶೋಭೆ ಮತ್ತು ರಸಿಕತೆ ಕಾಣುವಲ್ಲಿ ಅವಳು ಆಕರ್ಷಿತಳಾಗುತ್ತಾಳೆ. ಅಲ್ಲದೆ ಚಾರಿತ್ರ್ಯವುಳ್ಳ, ಕರ್ತವ್ಯದಕ್ಷ, ಸಂಯಮವುಳ್ಳ, ಧರ್ಮನಿಷ್ಠ ದೇವಭಕ್ತರು ಮತ್ತು ಕ್ಷಮಾಶೀಲ ಪುರುಷರು ಹಾಗೂ ಗುಣವತಿ / ಪತಿವ್ರತಾ ಸ್ತ್ರೀಯರು ವಾಸಿಸುವ ಮನೆಯಲ್ಲಿರಲು ಲಕ್ಷ್ಮೀಯು ಇಷ್ಟಪಡುತ್ತಾಳೆ.’

ದೇವಿಗೆ ಅರ್ಪಿಸುವ ನೈವೇದ್ಯ

ನೈವೇದ್ಯದಲ್ಲಿ ಲವಂಗ, ಏಲಕ್ಕಿ, ಹಾಲು ಮತ್ತು ಸಕ್ಕರೆ ಈ ಪದಾರ್ಥಗಳು ಇರಬೇಕು. ಈ ಪದಾರ್ಥಗಳಿಗೆ ‘ತ್ರಿಗುಣಾವತಾರ’ ಎನ್ನುತ್ತಾರೆ. ಈ ಪದಾರ್ಥಗಳು ಜೀವದಲ್ಲಿನ ತ್ರಿಗುಣಗಳ ಪ್ರಮಾಣವನ್ನು ಹೆಚ್ಚು-ಕಡಿಮೆ ಮಾಡುವ ಕಾರ್ಯವನ್ನು ಮಾಡುತ್ತವೆ.

Leave a Comment