
ಕೋಟೆ ಕಟ್ಟುವುದು ಎಂದರೆ ಏನು ?

ಕೋಟೆ ಕಟ್ಟುವುದು ಎಂದರೆ ಮನಸ್ಸು ಹಾಗೂ ಬುದ್ಧಿಯ ಮೇಲೆ ಈಶ್ವರನ ಶಕ್ತಿಯ ತೇಜವು ನಿರ್ಮಾಣವಾಗುವುದು. ಆದುದರಿಂದಲೇ ಕೋಟೆ ಕಟ್ಟುವುದರ ಮಾಧ್ಯಮದಿಂದ ನಾವು ಈಶ್ವರನ ಚೈತನ್ಯವನ್ನು ಪಡೆಯಬಹುದು.
ಕೋಟೆಯನ್ನು ಚಿಕ್ಕಮಕ್ಕಳೇ ಏಕೆ ಕಟ್ಟುತ್ತಾರೆ ?
ಚಿಕ್ಕ ಮಕ್ಕಳಲ್ಲಿ ನಿರ್ಮಲತೆಯಿರುತ್ತದೆ. ಚಿಕ್ಕ ಮಕ್ಕಳು ’ಈಶ್ವರನ ರೂಪವಾಗಿರುತ್ತಾರೆ’ ಎಂದು ಹೇಳಲಾಗುತ್ತದೆ; ಏಕೆಂದರೆ ಚಿಕ್ಕ ಮಕ್ಕಳ ಮನಸ್ಸಿನ ಮೇಲೆ ಹೆಚ್ಚಿನ ಸಂಸ್ಕಾರಗಳಾಗಿರುವುದಿಲ್ಲ. ೧೧ ವರ್ಷದೊಳಗಿನ ಮಕ್ಕಳು ಮುಗ್ಧರಾಗಿರುತ್ತಾರೆ. ಅನಂತರವೇ ಅವರು ಯಾವುದೇ ಕೃತಿಯನ್ನು ಬುದ್ಧಿಯಿಂದ ಮಾಡುತ್ತಾರೆ. ಮಕ್ಕಳಲ್ಲಿ ಈಶ್ವರನಿಂದ ಬಂದಂತಹ ಶಕ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಗ್ರಹಿಸುವ ಕ್ಷಮತೆಯಿರುತ್ತದೆ.
ಕೋಟೆಯನ್ನು ಮನೆಯ ಹೊರಗೆ ಏಕೆ ಕಟ್ಟುತ್ತಾರೆ ?
ಮನೆಯು ಸಮೃದ್ಧಿಯನ್ನು ದರ್ಶಿಸುವುದರ ಪ್ರತೀಕವಾಗಿರುತ್ತದೆ. ಮನೆಯೆದುರು ಕೋಟೆಯನ್ನು ನಿರ್ಮಿಸುವುದರಿಂದ ಮನೆಯ ರಕ್ಷಣೆ ಮಾಡಲು. ಅಂದರೆ ಮನೆಯಲ್ಲಿರುವ ಧನ, ಸಮೃದ್ಧಿಯನ್ನು ಉಳಿಸಲು ಛತ್ರಪತಿ ಶಿವಾಜಿ ಮಹಾರಾಜರಂತಹ ಕ್ಷಾತ್ರತೇಜವನ್ನು ಪ್ರತಿನಿಧಿಸುವ, ಕೋಟೆಯ ನೇತೃತ್ವವಿರುವ ಧರ್ಮಾಚರಣಿ ರಾಜನೊಂದಿಗೆ, ಅಭೇದ್ಯ ಕವಚವನ್ನು ನಿರ್ಮಿಸುತ್ತದೆ.
ಲಕ್ಷ್ಮೀಪೂಜೆ
ನರಕ ಚತುರ್ದಶಿ (ಆಶ್ವಯುಜ ಕೃಷ್ಣ ಚತುರ್ದಶಿ)
ಧನತ್ರಯೋದಶಿ (ಆಶ್ವಯುಜ ಕೃಷ್ಣ ತ್ರಯೋದಶಿ)
ತುಳಸೀ ವಿವಾಹ
ದೀಪಾವಳಿಯ ಶುಭಾಷಯಪತ್ರ