ದೇಶದ ಸ್ವಾತಂತ್ರ್ಯಕ್ಕಾಗಿ ಸರ್ವಸ್ವದ ತ್ಯಾಗ ಮಾಡಿದ ಕೆಲವು ಸತ್ಪುರುಷರ ಬಗ್ಗೆ ಕ್ರಾಂತಿಕಾರರು ಅಥವಾ ರಾಷ್ಟ್ರಪುರುಷರೆಂದು ಮಾತ್ರ ನಮಗೆ ಪರಿಚಯವಿರುತ್ತದೆ. ಮುಂದಿನ ಪೀಳಿಗೆಯನ್ನು ದೇಶಾಭಿಮಾನಿಯನ್ನಾಗಿಸಲು ಅದಕ್ಕೆ ರಾಷ್ಟ್ರಭಕ್ತಿಯ ಶಿಕ್ಷಣ ನೀಡುವ ಮಹಾನ್ ಧ್ಯೇಯವನ್ನಿರಿಸಿ ಈ ವೀರಪುರುಷರು ಮಾಡಿದ ಕಾರ್ಯವು ಅಷ್ಟೇ ಶ್ರೇಷ್ಠವಾಗಿದೆ.
ಮೊದಲ ಕ್ರಾಂತಿಕಾರರಾದ ವಾಸುದೇವ ಬಳವಂತ ಫಡಕೆ
![](https://hindujagruti.org/hinduism-for-kids-kannada/wp-content/uploads/sites/6/2015/01/1307891768_vasudevbalvant_13146.jpg)
೧೮೭೪ ರಲ್ಲಿ ಪೂನಾದಲ್ಲಿ ‘ಪೂನಾ ನೇಟಿವ್ ಇನ್ಸ್ಟಿಟ್ಯೂಟ್’ನ್ನು ಸ್ಥಾಪಿಸಿ, ಇದರ ವತಿಯಿಂದ ರಾಷ್ಟ್ರದ ಬಗ್ಗೆ ಶಿಕ್ಷಣ ಕೊಡುವ ಮೊದಲ ಶಾಲೆಯನ್ನು ಸ್ಥಾಪಿಸಿದರು.
ಲೋಕಮಾನ್ಯ ಬಾಲ ಗಂಗಾಧರ ತಿಲಕರು
![](https://hindujagruti.org/hinduism-for-kids-kannada/wp-content/uploads/sites/6/2015/01/1307891795_Bal-gangadhar-tilak.jpg)
ಇವರು ೧೮೮೦ ರಲ್ಲಿ ವಿಷ್ಣುಶಾಸ್ತ್ರಿ ಚಿಪಳೂಣಕರ ಮತ್ತು ಗೋಪಾಲ ಗಣೇಶ ಆಗರಕರ ಇವರ ಸಹಾಯದಿಂದ ಪೂನಾದಲ್ಲಿ ‘ನ್ಯೂ ಇಂಗ್ಲಿಷ್ ಸ್ಕೂಲ್’ನ್ನು ಸ್ಥಾಪಿಸಿದರು. ‘ಡೆಕ್ಕನ್ ಎಜ್ಯುಕೇಶನ್ ಸೊಸೈಟಿ’ ಮತ್ತು ‘ಫರ್ಗ್ಯುಸನ್ ಮಹಾವಿದ್ಯಾಲಯ’ವನ್ನೂ ಸ್ಥಾಪಿಸಿದರು.
ಲಾಲಾ ಲಜಪತರಾಯರು
![](https://hindujagruti.org/hinduism-for-kids-kannada/wp-content/uploads/sites/6/2015/01/1308589865_lalalajpatrai.jpg)
ಇವರು ‘ಆಂಗ್ಲೋ ವೈದಿಕ ಕಾಲೇಜ್’ನ್ನು ಸ್ಥಾಪಿಸಿ ರಾಷ್ಟ್ರೀಯ ವೃತ್ತಿಶಿಕ್ಷಣ ಕೊಟ್ಟರು.
ಪಂಡಿತ ಮದನಮೋಹನ ಮಾಲವೀಯ
![](https://hindujagruti.org/hinduism-for-kids-kannada/wp-content/uploads/sites/6/2015/01/1307891879_image002.jpg)
ಇವರು ೧ ಕೋಟಿ ೩೪ ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ೧೯೧೬ ರಲ್ಲಿ ಕಾಶಿಯಲ್ಲಿ ‘ಹಿಂದೂ ವಿಶ್ವವಿದ್ಯಾಲಯ’ವನ್ನು ಸ್ಥಾಪಿಸಿದರು.