ಶಿಕ್ಷಕರೇ ಸುಸಂಸ್ಕಾರಯುತ ಪೀಳಿಗೆಯನ್ನು ನಿರ್ಮಾಣ ಮಾಡಬಲ್ಲರು

ಶಿಕ್ಷಕರೆಂದರೆ ಸಮಾಜಕ್ಕೆ ಯೋಗ್ಯ ದಿಕ್ಕು ತೋರಿಸುವವರಾಗಿದ್ದಾರೆ. ಶಿಕ್ಷಕರು ನಿರ್ಮಿಸಿದ ಪೀಳಿಗೆಯೇ ಮುಂದೆ ರಾಷ್ಟ್ರವನ್ನು ಮುನ್ನಡೆಸುತ್ತದೆ. ಅಂದರೆ ಶಿಕ್ಷಕರು ರಾಷ್ಟ್ರ ನಿರ್ಮಾಣದಲ್ಲಿ ಮುಖ್ಯ ಅಡಿಪಾಯವಾಗಿದ್ದಾರೆ.

ಸದ್ಯದ ಸ್ಥಿತಿ

ಈಗಿನ ಶಿಕ್ಷಕರು ಮಕ್ಕಳ ಬಗ್ಗೆ ಅನೇಕಆಕ್ಷೇಪಗಳನ್ನು ಮಾಡುತ್ತಾರೆ.

೧. ಮಕ್ಕಳು ತುಂಬಾ ಮಾತನಾಡುತ್ತಾರೆ.

೨. ನಮ್ಮ ಮಾತನ್ನು ಮಕ್ಕಳು ಕೇಳುವುದಿಲ್ಲ.

೩. ಮಕ್ಕಳು ತುಂಬಾ ಚಂಚಲರಾಗಿದ್ದಾರೆ.

೪. ಶಿಕ್ಷಕರೊಂದಿಗೆ ತುಂಬಾ ಉದ್ಧಟತನದಿಂದ ಮಾತನಾಡುತ್ತಾರೆ.

೫. ತರಗತಿಯಲ್ಲಿ ಒಬ್ಬರಿಗೊಬ್ಬರು ತೊಂದರೆ ಕೊಡುತ್ತಾರೆ.

೬. ಅಧ್ಯಯನ ಮಾಡುವುದಿಲ್ಲ.

ಮಕ್ಕಳಲ್ಲಿ ಬದಲಾವಣೆ ಆಗದಿರಲು ಸಂಪೂರ್ಣ ಶಿಕ್ಷಣ ಪದ್ಧತಿಯೇ ಹೊಣೆಯಾಗಿದೆ

ಮೇಲೆ ನೀಡಿದ ಸಮಸ್ಯೆಗಳ ಬಗ್ಗೆ ನಾವೆಲ್ಲರೂ ವಿಚಾರ ಮಾಡಬೇಕಾಗಿದೆ. ಎಷ್ಟೊಂದು ವರ್ಷಗಳಿಂದ ನಾವು ಮಕ್ಕಳಿಗೆ ಕಲಿಸುತ್ತಿದ್ದೇವೆ. ಬಹುತೇಕ ಎಲ್ಲಾ ಶಿಕ್ಷಕರು ಪ್ರಾಮಾಣಿಕವಾಗಿಯೇ ಕಲಿಸುತ್ತಾರೆ. ಆದರೂ ಮಕ್ಕಳಲ್ಲಿ ಬದಲಾವಣೆ ಕಾಣುವುದಿಲ್ಲ. ಇದನ್ನು ಎಲ್ಲಾ ಶಿಕ್ಷಕರು ಒಪ್ಪಲೇಬೇಕು. ಇದಕ್ಕೆ ಮುಖ್ಯ ಕಾರಣ ನಮ್ಮ ಸಂಸ್ಕೃತಿಗೆ ಒಪ್ಪದಆಂಗ್ಲ ಶಿಕ್ಷಣ ಪದ್ಧತಿ. ಇದು ನಮ್ಮ ಶಿಕ್ಷಣ ಪದ್ಧತಿಯಾಗಿರದೇ ಮೆಕಾಲೆಯ ಶಿಕ್ಷಣ ಪದ್ಧತಿಯಾಗಿದೆ. ಈ ಶಿಕ್ಷಣ ಪದ್ಧತಿಯಿಂದ ಮಕ್ಕಳು ಸಂವೇದನಾಶೀಲತೆ ಕಳೆದುಕೊಂಡ ಮನುಷ್ಯರಾಗುತ್ತಾರೆ ಮತ್ತು ಈ ವಿಷ ವೃಕ್ಷದ ಫಲವನ್ನು ನಾವಿಂದು ಕಾಣುತ್ತಿದ್ದೇವೆ. ಹಾಗಾಗಿ ಮಕ್ಕಳಲ್ಲಿ ಬದಲಾವಣೆ ಆಗದಿರಲು ಸಂಪೂರ್ಣವಾಗಿ ಶಿಕ್ಷಣ ಪದ್ಧತಿಯೇ ಹೊಣೆಯಾಗಿದೆ.

ಅಧ್ಯಾತ್ಮಶಾಸ್ತ್ರದಂತೆ ಕುಲದೇವರ ಉಪಾಸನೆ ಮಾಡುವುದರಿಂದ
ಮಕ್ಕಳ ವರ್ತನೆಯಲ್ಲಿ ಬದಲಾವಣೆಯಾಗುವುದು

ಶಿಕ್ಷಣ ಪದ್ಧತಿಯೇ ಸರಿ ಇಲ್ಲದಿರುವಾಗ ನಾವೇ ಇದಕ್ಕೆ ಪರಿಹಾರ ಹುಡುಕಬೇಕು. ಕಾರಣ ನಾವು ಸಮಾಜದ ಮಾರ್ಗದರ್ಶಕರಾಗಿದ್ದೇವೆ. ಸಮಾಜ ದಿಕ್ಕು ತಪ್ಪಿದಾಗ ಅದಕ್ಕೆ ಸರಿಯಾದ ದಾರಿ ತೋರಿಸುವುದು ಶಿಕ್ಷಕರಾದ ನಮ್ಮೆಲ್ಲರ ಕರ್ತವ್ಯವಾಗಿದೆ. ಶಿಕ್ಷಕರೇ ಇದಕ್ಕೆ ಪರಿಹಾರವನ್ನು ಕಂಡುಹಿಡಿಯಬಲ್ಲರು. ಶಿವಾಜಿ ಮಹಾರಾಜರು ಚಿಕ್ಕ ವಯಸ್ಸಿನಲ್ಲಿ ಹಿಂದವೀ ಸ್ವರಾಜ್ಯ ಸ್ಥಾಪನೆಗಾಗಿ ಪ್ರಮಾಣ ಮಾಡಿದರು. ಅದಕ್ಕೆ ಕಾರಣ ಅವರು ಭವಾನಿ ದೇವಿಯ ಉಪಾಸನೆ ಮಾಡುತ್ತಿದ್ದರು. ಇದರಿಂದ ನಮ್ಮ ಗಮನಕ್ಕೆ ಬರುವುದೇನೆಂದರೆ ದೇವರ ನಾಮಸ್ಮರಣೆಯಿಂದ ಮಕ್ಕಳ ವರ್ತನೆಯಲ್ಲಿ ಬದಲಾವಣೆಯಾಗಬಹುದು. ಇದು ತ್ರಿವಾರ ಸತ್ಯವಾಗಿದೆ. ಈ ಸತ್ಯವನ್ನು ಶಿಕ್ಷಕರು ಅರಿತು ತಮ್ಮಲ್ಲಿ ಅಳವಡಿಸಿಕೊಂಡರೆ ಖಂಡಿತವಾಗಿಯೂ ಸುಸಂಸ್ಕಾರಯುತ ಪೀಳಿಗೆಯನ್ನು ನಿರ್ಮಿಸಬಹುದು. ಇದಕ್ಕೆ ಮೊದಲು ಶಿಕ್ಷಕರು ದೇವರ ಉಪಾಸನೆಯನ್ನು ಮಾಡಬೇಕು. ನಾವೆಲ್ಲರು ಯಾವುದಾದರು ದೇವರ ಉಪಾಸನೆಯನ್ನು ಮಾಡುತ್ತಿರುತ್ತೇವೆ. ಅದಕ್ಕಿಂತಲೂ ಅಧ್ಯಾತ್ಮಶಾಸ್ತ್ರದಂತೆ ನಾವು ನಮ್ಮ ಮನೆದೇವರ ಉಪಾಸನೆಯನ್ನು ಮಾಡಬೇಕು.

ಉಪಾಸನೆಯನ್ನು ಮಾಡಿ ಆನಂದದಿಂದಿರುವ ಶಿಕ್ಷಕರೊಬ್ಬರಿಂದ
ಅನೇಕ ಮಕ್ಕಳಿಗೆ ಆನಂದವನ್ನು ಕೊಡಲು ಸಾಧ್ಯವಾಗುತ್ತದೆ

ಶಿಕ್ಷಕರು ಕುಲದೇವರ ಉಪಾಸನೆಯನ್ನು ಮಾಡುವುದರಿಂದ ಅವರ ವಾಣಿಯಲ್ಲಿ ಚೈತನ್ಯವು ಬರುತ್ತದೆ. ನಾವು ಹೇಳುವ ಪ್ರತಿಯೊಂದು ಮಾತನ್ನು ಮಕ್ಕಳು ಕೇಳುತ್ತಾರೆ ಮತ್ತು ತಕ್ಷಣ ಕೃತಿಯಲ್ಲಿ ತರುತ್ತಾರೆ. ಇಲ್ಲಿ ನಮಗೆ ಅತಿ ಮುಖ್ಯವಾದ ಅಂಶವೊಂದು ಗಮನಕ್ಕೆ ಬರುತ್ತದೆ. ಅದೇನೆಂದರೆ ಸಮಾಜದ ನಿರ್ಮಾಣವು ನಾವು ನಮ್ಮ ಜೀವನದಲ್ಲಿ ಅಧ್ಯಾತ್ಮಕ್ಕೆ ಎಷ್ಟು ಮಹತ್ವ ನೀಡುತ್ತೇವೆ ಎನ್ನುವುದರ ಮೇಲೆ ಇರುತ್ತದೆ. ಭಕ್ತಿಯ ಶಕ್ತಿಯಿಂದ ನಾವು ಮಕ್ಕಳಲ್ಲಿ ಬದಲಾವಣೆಯನ್ನು ತರಬಹುದು. ಇದರಲ್ಲಿ ಎರಡು ಲಾಭವಿದೆ. ಮನೆದೇವರ ಜಪದಿಂದ ನಾವು ಒತ್ತಡದ ಜೀವನ, ಗಡಿಬಿಡಿಯಿಂದ ಮುಕ್ತಿ ಹೊಂದುತ್ತೇವೆ. ನಕಾರಾತ್ಮಕ ವಿಚಾರ, ನಿರಾಶೆಯಿಂದ ಮುಕ್ತಿ ಹೊಂದುತ್ತೇವೆ ಅಂದರೆ ನಾವು ಆನಂದವಾಗಿರುತ್ತೇವೆ. ಆನಂದದಿಂದ ಇರುವ ಒಬ್ಬ ಶಿಕ್ಷಕ ಅನೇಕ ಮಕ್ಕಳಿಗೆ ಆನಂದ ನೀಡಬಲ್ಲನು.

’ಎಲ್ಲಾ ಶಿಕ್ಷಕರು ಮನೆದೇವರ ಜಪ ಮಾಡಿ ಸ್ವತಃ ಆನಂದಿಯಾಗಲಿ. ಎಲ್ಲಾ ವಿದ್ಯಾರ್ಥಿಗಳನ್ನು ಮನೆದೇವರ ಉಪಾಸಕರನ್ನಾಗಿ ಮಾಡಲಿ ಮತ್ತು ಬರುವ ಪೀಳಿಗೆಯು ಸುಸಂಸ್ಕಾರಯುತವಾಗಲಿ ಮತ್ತು ಬೇಗ ರಾಮರಾಜ್ಯ ಸ್ಥಾಪನೆಯಾಗಲಿ’, ಇದೇ ದೇವರ ಚರಣಗಳಲ್ಲಿ ಪ್ರಾರ್ಥನೆ.

– ಶ್ರೀ. ರಾಜೇಂದ್ರಪಾವಸಕರ (ಗುರೂಜಿ),ಪನವೇಲ

Leave a Comment