ಸಮಯದ ಮಹತ್ವ

ಕ್ರಾಂತಿಕಾರರ ಮಾಲಿಕೆಯಲ್ಲಿ ಚಾಪೆಕರ ಸೋದರರ ಹೆಸರನ್ನು ಅತ್ಯಂತ ಆದರದಿಂದ ಹೇಳಲಾಗುತ್ತದೆ. ಮೂರೂ ಸಹೋದರರು ರಾಷ್ಟ್ರಕ್ಕಾಗಿ ನಗುತ್ತಲೇ ನೇಣುಗಂಬಕ್ಕೇರಿದವರು. ಆ ದಿನ ದಾಮೋದರ ಚಾಪೆಕರರನ್ನು ಸರವರಾ ಜೈಲಿನಲ್ಲಿ ನೇಣು ಹಾಕಲು ಕರೆದುಕೊಂಡು ಬರುತ್ತಿದ್ದರು.

ದಾಮೋದರರು ಆ ದಿವಸ ಪ್ರಸನ್ನ ಮತ್ತು ಆನಂದದಿಂದ ಇದ್ದರು. ಅವರ ಕೈಯಲ್ಲಿ ಭಗವದ್ಗೀತೆಯ ಪುಸ್ಥಕವಿತ್ತು. ಅವರು ಗೀತೆಯನ್ನು ಓದುತ್ತಲೇ ಶಿಕ್ಷೆಗಾಗಿ ಸಿದ್ಧರಾಗಿದ್ದರು. ನೇಣು ಹಾಕಲು ಸಮಯವಾದರೂ ಅಂಗ್ರೇಜಿ ಅಧಿಕಾರಿಗಳು ಬರಲಿಲ್ಲ. ೫ ನಿಮಿಷ ತಡವಾಗಿ ಅಂಗ್ರೇಜಿ ಅಧಿಕಾರಿಗಳು ಬಂದರು. ಅಂಗ್ರೇಜಿ ಅಧಿಕಾರಿಗಳ ಈ ಬೇಜವಬ್ದಾರಿ ನೋಡಿ ದಾಮೋದರರು ಕ್ರೋಧಿತರಾದರು. ಅವರು ಅತ್ಯಂತ ಚಾಣಾಕ್ಷತನದಿಂದ ಅಂಗ್ರೇಜಿಗಳಿಗೆ ಅವರ ತಪ್ಪನ್ನು ತೋರಿಸಿಕೊಟ್ಟರು. ಅವರು ಹೇಳಿದರು, "ನಾನು ಯಾವ ಸಮಾಜದಿಂದ ಬಂದಿದ್ದೀನೋ ಅಲ್ಲಿ ಎಲ್ಲರೂ ಅಂಗ್ರೇಜಿಗಳೆಂದರೆ ತುಂಬಾ ಕಟ್ಟುನಿಟ್ಟಾಗಿ ಸಮಯ ಪಾಲಿಸುತ್ತಾರೆ ಎಂದು ತಿಳಿಯುತ್ತಾರೆ. ಆದರೆ ಇಂದು ಅದು ಸುಳ್ಳು ಎಂದು ತಿಳಿಯಿತು".

ನೇಣುಗಂಬಕ್ಕೇರಲು ಸಿದ್ಧನಾಗಿದ್ದ ವ್ಯಕ್ತಿಯನ್ನೂ ಕಾಯುವಂತೆ ಮಾಡಿದ ಅಂಗ್ರೇಜರಿಗೆ ನಾಚಿಕೆಯಾಗಬೇಕು.

Leave a Comment