ಶ್ರೀಕೃಷ್ಣನ ನಾಮಜಪ

ದೇವರ ಬಗ್ಗೆ ಭಕ್ತಿಭಾವ ನಿರ್ಮಾಣವಾದ ನಂತರ ದೇವರ ನಾಮಜಪವನ್ನುಹೇಗೆ ಮಾಡಿದರೂ ನಡೆಯುತ್ತದೆ. ಆದರೆ ಭಕ್ತಿಭಾವವು ಬೇಗನೆ ನಿರ್ಮಾಣವಾಗಲು ಮತ್ತು ದೇವರ ತತ್ತ್ವದ ಹೆಚ್ಚೆಚ್ಚು ಲಾಭವಾಗಲು ನಾಮಜಪದ ಉಚ್ಚಾರ ಯೋಗ್ಯವಾಗಿರುವುದು ಅವಶ್ಯಕವಾಗಿದೆ.

ತಾರಕ ಮತ್ತು ಮಾರಕ ಎಂದು ದೇವರ ಎರಡು ರೂಪಗಳಿರುತ್ತದೆ. ಭಕ್ತರಿಗೆ ಆಶೀರ್ವಾದವನ್ನು ನೀಡುವ ರೂಪವೆಂದರೆ ತಾರಕ ರೂಪ. ಉದಾ: ಆಶೀರ್ವಾದ ಮುದ್ರೆಯಲ್ಲಿ ಸಾಮಾನ್ಯವಾಗಿಕಾಣಿಸುವ ಶ್ರೀಕೃಷ್ಣ. ಅಸುರರ ಸಂಹಾರವನ್ನು ಮಾಡುವ ರೂಪವೆಂದರೆ ಮಾರಕರೂಪ. ಉದಾ:ಶಿಶುಪಾಲ, ಕಂಸ, ಜರಾಸಂಧ ಮುಂತಾದಅಸುರರ ನಾಶವನ್ನು ಮಾಡುತ್ತಿರುವ ಶ್ರೀಕೃಷ್ಣ. ದೇವರ ಬಗ್ಗೆ ಸಾತ್ತ್ವಿಕ ಭಾವ ನಿರ್ಮಾಣವಾಗಲು ತಾರಕ ರೂಪದ ನಾಮಜಪದ ಅವಶ್ಯಕತೆಯಿರುತ್ತದೆ ಮತ್ತು ದೇವರಿಂದ ಶಕ್ತಿ ಮತ್ತು ಚೈತನ್ಯ ಗ್ರಹಿಸಲು ಅವರ ಮಾರಕ ರೂಪದ ನಾಮಜಪದ ಅವಶ್ಯಕತೆ ಇರುತ್ತದೆ.

ಶ್ರೀಕೃಷ್ಣನ ತಾರಕ-ಮಾರಕ ಸಂಯುಕ್ತ ನಾಮಜಪವನ್ನು ಯೋಗ್ಯ ಉಚ್ಚಾರ ಸಹಿತ ಹೇಗೆ ಮಾಡಬೇಕೆಂದು ಹೇಳಲಾಗಿದೆ.

’ಓಂ ನಮೋ ಭಗವತೇ ವಾಸುದೇವಾಯ’ ಈ ನಾಮಜಪದಲ್ಲಿ ’ನಮೋ’ ಎಂಬ ಶಬ್ದವನ್ನು ಉಚ್ಚರಿಸುವಾಗ ಸಂಪೂರ್ಣ ಶರಣಾಗತಿಯಿಂದ ಹೇಳಬೇಕು. ’ಭಗವತೇ’ ಈ ಶಬ್ದದ ನಂತರ ಸ್ವಲ್ಪ ಹೊತ್ತು ತಡೆದು ನಂತರ ’ವಾಸುದೇವಾಯ’ ಎಂದು ಹೇಳಬೇಕು. ’ಭಗವತೇ ಶಬ್ದದಅಕ್ಷರ ಮತ್ತುವಾಸುದೇವಾಯಶಬ್ದದವಾಅಕ್ಷರಕ್ಕೆ ಒತ್ತು ನೀಡಬೇಕು.