
ಕೊಲ್ಹಾಪುರ – ಕೊಲ್ಹಾಪುರ ನಗರದ ‘ಯೆವಲೇಜ್ ಮಿಲ್ಕ್ ಕಾರ್ನರ್’ ಅಂಗಡಿಯಲ್ಲಿ, ಇಂಡೋನೇಷ್ಯಾದಿಂದ ಬಂದಿರುವ ಮತ್ತು ‘ಹಲಾಲ್’ ಪ್ರಮಾಣಪತ್ರವನ್ನು ಹೊಂದಿರುವ ‘ಮೆಂಟೋಸ್’ ಸಿಹಿತಿಂಡಿಯ ಉತ್ಪನ್ನವನ್ನು ಮಾರಾಟ ಮಾಡಲಾಗುತ್ತಿದೆ ಎಂದು ಹಿಂದೂತ್ವವಾದಿಗಳ ಗಮನಕ್ಕೆ ಬಂತು. ಈ ವಿಷಯ ತಿಳಿದ ಕೂಡಲೇ ಹಿಂದೂತ್ವವಾದಿಗಳು ಸಂಬಂಧಪಟ್ಟ ಅಂಗಡಿಯವರನ್ನು ಭೇಟಿ ಮಾಡಿ ‘ಹಲಾಲ್’ ಉತ್ಪನ್ನವು ಭಾರತಕ್ಕೆ ಹೇಗೆ ಅಪಾಯಕಾರಿ ಮತ್ತು ಅದರಿಂದ ಸಂಗ್ರಹವಾಗುವ ನಿಧಿಯನ್ನು ಜಿಹಾದಿ ಭಯೋತ್ಪಾದಕರಿಗೆ ಹೇಗೆ ಬಳಸಲಾಗುತ್ತದೆ’ ಎಂಬುದನ್ನು ವಿವರಿಸಿದರು.
ಈ ಪ್ರಬೋಧನೆಯ ನಂತರ, ಸಂಬಂಧಪಟ್ಟ ಅಂಗಡಿಯವರು ‘ಮೆಂಟೋಸ್’ ಸಿಹಿತಿಂಡಿಗಳನ್ನು ತೆಗೆದಿಟ್ಟು, ‘ಇನ್ನು ಮುಂದೆ ‘ಹಲಾಲ್’ ಪ್ರಮಾಣಪತ್ರದ ಯಾವುದೇ ವಸ್ತುಗಳನ್ನು ಮಾರಾಟ ಮಾಡುವುದಿಲ್ಲ’ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹಿಂದೂತ್ವವಾದಿ ಶ್ರೀ. ಸಚಿನ್ ಭೋಸಲೆ, ಮಹಾರಾಷ್ಟ್ರ ಮಂದಿರ ಮಹಾಸಂಘದ ಶ್ರೀ. ಅಶೋಕ್ ಗುರವ್, ಹಿಂದೂ ಜನಜಾಗೃತಿ ಸಮಿತಿಯ ಸರ್ವಶ್ರೀ ಶಿವಾನಂದ ಸ್ವಾಮಿ, ಮಹೇಂದ್ರ ಅಹಿರೆ, ಪ್ರೀತಮ್ ಪವಾರ್, ವಿಶ್ವಾಸ್ ಪಾಟೀಲ್ ಹಾಗೂ ಇತರ ಹಿಂದೂತ್ವವಾದಿಗಳು ಉಪಸ್ಥಿತರಿದ್ದರು.
ರಾಷ್ಟ್ರಪ್ರೇಮಿ ವ್ಯಾಪಾರಿಗಳು ‘ಹಲಾಲ್’ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ! – ಶಿವಾನಂದ ಸ್ವಾಮಿ, ಹಿಂದೂ ಜನಜಾಗೃತಿ ಸಮಿತಿ
‘ಯೇವಲೇಜ್ ಮಿಲ್ಕ್ ಕಾರ್ನರ್’ನ ವ್ಯಾಪಾರಿಗಳ ಆದರ್ಶವನ್ನು ತೆಗೆದುಕೊಂಡು, ಇತರ ರಾಷ್ಟ್ರಪ್ರೇಮಿ ವ್ಯಾಪಾರಿಗಳು ಸಹ ತಮ್ಮ ಅಂಗಡಿಗಳಲ್ಲಿರುವ ‘ಹಲಾಲ್’ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂದು ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶಿವಾನಂದ ಸ್ವಾಮಿಯವರು ಮನವಿ ಮಾಡಿದ್ದಾರೆ.
ಆಧಾರ : ಸನಾತನ ಪ್ರಭಾತ ಪತ್ರಿಕೆ


