Menu Close

‘ವಾಲ್ಮೀಕಿ ರಾಮಾಯಣದಲ್ಲಿ ಭಗವಾನ್ ಶ್ರೀರಾಮನು ಪ್ರತಿದಿನ ಮಧ್ಯಾಹ್ನ ಸೀತೆಯೊಂದಿಗೆ ಕುಳಿತು ಮದ್ಯಪಾನ ಮಾಡುತ್ತಿದ್ದನು ಎಂದು ಹೇಳಲಾಗಿದೆ’ – ಲೇಖಕ ಕೆ. ಎಸ್. ಭಗವಾನ್


ಹಿಂದೂ ವಿರೋಧಿ ಲೇಖಕ ಮತ್ತು ವಿಚಾರವಾದಿ ಕೆ. ಎಸ್. ಭಗವಾನ್ ಇವರು ಪ್ರಭು ಶ್ರೀರಾಮ ಮತ್ತು ಸೀತಾಮಾತೆಯ ಘೋರ ಅವಮಾನ ಮಾಡಿದ್ದಾರೆ. ಜನವರಿ 20 2023 ರಂದು ಮಂಡ್ಯದ ಒಂದು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿರುವಾಗ, `ರಾಮ ರಾಜ್ಯದ ಮಾತುಗಳು ಕೇಳಿ ಬರುತ್ತಿವೆ. ವಾಲ್ಮೀಕಿ ರಾಮಾಯಣದ ಉತ್ತರ ಕಾಂಡ ಓದಿದರೆ ಭಗವಾನ್ ರಾಮ ಆದರ್ಶನಾಗಿರಲಿಲ್ಲ ಎಂದು ತಿಳಿಯುತ್ತದೆ. ವಾಲ್ಮೀಕಿ ರಾಮಾಯಣದ ಪ್ರಕಾರ ಭಗವಾನ್ ರಾಮ ಪ್ರತಿದಿನ ಮಧ್ಯಾಹ್ನ ತನ್ನ ಪತ್ನಿ ಸೀತೆಯೊಂದಿಗೆ ಕುಳಿತು ಮದ್ಯಪಾನ ಮಾಡುತ್ತಿದ್ದನು.

ಈ ಹಿಂದೆಯೂ ಇದೇ ರೀತಿಯ ವಿವಾದಿತ ಹೇಳಿಕೆಗಳನ್ನು ನೀಡಿದ್ದರು.

ಭಗವಾನ್ ಇವರು ರಾಮನ ಕುರಿತು ಟೀಕೆ ಮಾಡಿರುವುದು ಮೊದಲ ಬಾರಿಯೇನಲ್ಲ. 2019 ರಲ್ಲಿ  ಈ  ಲೇಖಕ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದರು, ಆಗ ಅವರು, ವಾಲ್ಮೀಕಿ ರಾಮಾಯಣದ ಪ್ರಕಾರ, ಭಗವಾನ್ ರಾಮ ಮದ್ಯಪಾನ ಮಾಡುತ್ತಿದ್ದನು ಮತ್ತು ಸೀತೆಗೂ ಅದನ್ನು ಸೇವನೆ ಮಾಡಿಸುತ್ತಿದ್ದರು ಎಂದಿದ್ದರು. ಅವರು ತಮ್ಮ ಪುಸ್ತಕ ‘ರಾಮ ಮಂದಿರ ಏಕೆ ಬೇಡ’ ದಲ್ಲಿ ಈ ಟೀಕೆ ಮಾಡಿದ್ದರು. ಕೆಲವು ಹಿಂದೂ ಸಂಘಟನೆಗಳು ಕೆ. ಎಸ್. ಭಗವಾನ್ ಇವರ ಟಿಪ್ಪಣಿಗಳ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಆಧಾರ : Times Now