ಬೇಸಿಗೆ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ!

ಏಪ್ರಿಲ್ ಮತ್ತು ಮೇ ಇವೆರಡು ತಿಂಗಳೆಂದರೆ ಗ್ರೀಷ್ಮ ಋತು. ಈ ಋತುವಿನಲ್ಲಿ ವಾತಾವರಣ ಶುಷ್ಕ ಮತ್ತು ಉಷ್ಣವಿರುತ್ತದೆ. ಶರೀರದ ಶಕ್ತಿ ಹಾಗೂ ಜೀರ್ಣಶಕ್ತಿ ಕೂಡ ಕಡಿಮೆಯಿರುತ್ತದೆ. ಆ ಸಮಯದಲ್ಲಿ ಮೂಗಿನಿಂದ ರಕ್ತ ಸ್ರಾವವಾಗುವುದು, ಉರಿಮೂತ್ರ, ಬೆವರುಸಾಲೆ ಬರುವುದು, ಸೆಕೆಬೊಕ್ಕೆ, ಕಣ್ಣು ಬರುವುದು ಮುಂತಾದ ಕಾಯಿಲೆಗಳು ಆಗುತ್ತವೆ. ಬೇಸಿಗೆಯಲ್ಲಿ ಜಲಾಶಯ ಬತ್ತಿ ನೀರು ಕೊಳೆಯಾಗುತ್ತದೆ. ಅದರಿಂದ ಡೈಯರಿಯಾ, ಬೇಧಿ, ವಾಂತಿಯಾಗುವುದು (ಗ್ಯಾಸ್ಟ್ರೋ), ವಿಷಮಜ್ವರ (ಟೈಫೈಡ್), ಕಾಮಾಲೆ ಮುಂತಾದ ಕಾಯಿಲೆಗಳು ಬರುತ್ತವೆ. ಬೇಸಿಗೆಯಲ್ಲಿನ ಈ ಕಾಯಿಲೆಗಳಿಂದ ನಮ್ಮ ರಕ್ಷಣೆ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಂದಿನಂತೆ ಕಾಳಜಿ ವಹಿಸಬೇಕು.

೧. ಬೆಳಗ್ಗೆ ಹಲ್ಲು ತಿಕ್ಕಿದ ನಂತರ ಆಕಳಿನ ತುಪ್ಪದ ಅಥವಾ ತೆಂಗಿನ ಎಣ್ಣೆಯ ೨-೨ ಹನಿ ಮೂಗಿಗೆ ಹಾಕಬೇಕು. ಇದಕ್ಕೆ ನಸ್ಯ ಎಂದು ಹೇಳುತ್ತಾರೆ. ಅದರಿಂದ ತಲೆ ಮತ್ತು ಕಣ್ಣುಗಳ ಉಷ್ಣತೆ ಕಡಿಮೆಯಾಗುತ್ತದೆ.

೨. ರುಚಿಕರ, ಶುಷ್ಕ, ಹಳಸಿದ, ಉಪ್ಪು, ಅತೀಖಾರ, ಮಸಾಲೆಯುಕ್ತ ಮತ್ತು ಕರಿದ ಪದಾರ್ಥ ಹಾಗೂ ಆಮ್‌ಚೂರ್, ಉಪ್ಪಿನ ಕಾಯಿ, ಹುಣಸೇಹಣ್ಣು ಮುಂತಾದ ಹುಳಿ, ಕಹಿ ಮತ್ತು ಒಗರು ರಸದ ಪದಾರ್ಥ ತಿನ್ನುವುದನ್ನು ತಡೆಯಬೇಕು.

೩. ಶೀತಪೇಯಗಳು (ಕೋಲ್ಡ್‌ಡ್ರಿಂಕ್ಸ್), ಐಸ್‌ಕ್ರೀಮ್, ಹಾಳಾಗಬಾರದೆಂದು ರಸಾಯನ ಹಾಕಿಉಪಯೋಗಿಸುವಸೀಲ್ಮಾಡಿದ ಹಣ್ಣುಗಳ ರಸ ಮುಂತಾದವುಗಳನ್ನು ಸೇವಿಸಬಾರದು. ಈ ಪದಾರ್ಥಗಳು ಜೀರ್ಣಶಕ್ತಿ ಯನ್ನು ಹಾಳು ಮಾಡುತ್ತವೆ. ಇವುಗಳ ಅತೀಸೇವನೆಯಿಂದ ರಕ್ತಧಾತು ದೂಷಿತ ವಾಗಿ ಚರ್ಮರೋಗಗಳು ಬರುತ್ತವೆ.


೪. ಮಾವಿನಕಾಯಿ ಬೇಯಿಸಿ ಮಾಡಿದ ಸಿಹಿ ರಸ, ನೀರಿನಲ್ಲಿ ನಿಂಬೆ ರಸ ಮತ್ತು ಸಕ್ಕರೆ ಹಾಕಿ ತಯಾರಿಸಲಾದ ಶರಬತ್, ಜೀರಿಗೆಯ ಶರಬತ್, ಎಳನೀರು, ಹಣ್ಣುಗಳ ತಾಜಾ ರಸ, ಹಾಲು ಹಾಕಿ ಮಾಡಲಾದ ಅಕ್ಕಿಯ ಖೀರು, ಗುಲಕಂದ ಇತ್ಯಾದಿ ಶೀತ ಮತ್ತು ದ್ರವ ಪದಾರ್ಥಗಳಲ್ಲಿ ಯಾವುದು ಸಾಧ್ಯವಿದೆಯೋ ಮತ್ತು ಸಿಗುತ್ತದೆಯೋ ಅವುಗಳು ಆಹಾರದಲ್ಲಿರಬೇಕು. ಇದರಿಂದ ಸೂರ್ಯನ ಪ್ರಖರ ಉಷ್ಣತೆಯಿಂದ ಶರೀರದ ರಕ್ಷಣೆಯಾಗಲು ಸಹಾಯವಾಗುತ್ತದೆ.

೫. ಈ ದಿನಗಳಲ್ಲಿ ಬಾಯಾರಿಕೆ ತುಂಬ ಆಗುತ್ತಿರುವುದರಿಂದ ಬಾಯಾರಿಕೆ ತಣಿಯುವಷ್ಟು ನೀರು ಕುಡಿಯಬೇಕು.

೬. ಈ ಋತುವಿನಲ್ಲಿ ಮೊಸರನ್ನು ತಿನ್ನಬಾರದು. ಅದರ ಬದಲು ಸಕ್ಕರೆ ಮತ್ತು ಜೀರಿಗೆ ಹಾಕಿದ ಸಿಹಿ ಮಜ್ಜಿಗೆ ತೆಗೆದುಕೊಳ್ಳಬಹುದು.

೭. ಈ ದಿನಗಳಲ್ಲಿ ಸಡಿಲವಾದ ನೂಲಿನ ಬಟ್ಟೆಗಳನ್ನು ಉಪಯೋಗಿಸಬೇಕು ಮತ್ತು ಕೂದಲುಗಳ ಸ್ವಚ್ಛತೆಯನ್ನು ಕಾಪಾಡ ಬೇಕು. ಪ್ಲಾಸ್ಟಿಕ್ ಚಪ್ಪಲಿಗಳನ್ನು ಉಪಯೋಗಿಸಬಾರದು.

೮. ಸುಡು ಬಿಸಿಲಿನಲ್ಲಿ ಹೋಗುವುದಿದ್ದರೆ, ನೀರು ಕುಡಿದು ಹೋಗಬೇಕು. ಬಿಸಿಲಿನಿಂದ ತಲೆ ಮತ್ತು ಕಣ್ಣುಗಳ ರಕ್ಷಣೆ ಗಾಗಿ ಟೊಪ್ಪಿ ಮತ್ತು ‘ಗಾಗಲ್’ ಉಪಯೋಗಿಸಬೇಕು.

೯. ಉಷ್ಣ ವಾತಾವರಣದಿಂದ ಶೀತ ವಾತಾವರಣಕ್ಕೆ ಬಂದ ನಂತರ ತಕ್ಷಣ ನೀರನ್ನು ಕುಡಿಯಬಾರದು. ೧೦-೧೫ ನಿಮಿಷದ ನಂತರವೇ ನೀರು ಕುಡಿಯಬೇಕು.

೧೦. ಈ ದಿನಗಳಲ್ಲಿ ಶೀತಕಪಾಟು ಅಥವಾ ಕೂಲರ್ ಇವುಗಳಲ್ಲಿನ ತಣ್ಣನೆ ನೀರು ಕುಡಿದರೆ ಗಂಟಲು, ಹಲ್ಲು ಮತ್ತು ಕರುಳಿನ ಮೇಲೆ ದುಷ್ಪರಿಣಾಮವಾಗುತ್ತದೆ; ಆದುದರಿಂದ ಸಾದಾ ಅಥವಾ ಮಡಿಕೆ ಯಲ್ಲಿನ ನೀರನ್ನು ಕುಡಿಯಬೇಕು.

೧೧. ಲಾವಂಚದ ಬೇರಿನ ಎರಡು ಕಟ್ಟನ್ನು ಜೊತೆಯಲ್ಲಿಟ್ಟುಕೊಳ್ಳಬೇಕು. ಒಂದು ಕಟ್ಟು ಕುಡಿಯುವ ನೀರಿಗೆ ಹಾಕ ಬೇಕು ಮತ್ತು ಇನ್ನೊಂದನ್ನು ಬಿಸಿಲಿಗೆ ಒಣಗಿಸಬೇಕು. ಮಾರನೇ ದಿನ ಬಿಸಿಲಿಗೆ ಒಣಗಿಸಿದ ಕಟ್ಟನ್ನು ಕುಡಿಯುವ ನೀರಿಗೆ ಮತ್ತು ನೀರಿನಲ್ಲಿನ ಕಟ್ಟನ್ನು ಬಿಸಿಲಿಗೆ ಒಣಗಿಸಬೇಕು. ಅದರಂತೆ ಪ್ರತಿದಿನ ಮಾಡಬೇಕು. ಈ ಲಾವಂಚದ ನೀರು ಉಷ್ಣತೆಯ ವಿಕಾರ ದೂರ ಮಾಡುತ್ತದೆ.

೧೨. ಹೆಚ್ಚು ವ್ಯಾಯಾಮ, ಹೆಚ್ಚು ಪರಿಶ್ರಮ, ಹೆಚ್ಚು ಉಪವಾಸ, ಬಿಸಿಲಿನಲ್ಲಿ ತಿರುಗುವುದು ಮತ್ತು ಹಸಿವು-ನೀರಡಿಕೆ ತಡೆಹಿಡಿಯುವುದು ಇತ್ಯಾದಿ ವಿಷಯಗಳನ್ನು ತಡೆಯಬೇಕು.

೧೩. ಕಾಲಿಗೆ ಬಿರುಕು ಬೀಳುವುದು ಮತ್ತು ಉಷ್ಣತೆಯ ತೊಂದರೆಯಾಗುತ್ತಿದ್ದರೆ ಕೈ-ಕಾಲಿಗೆ ಮೆಹಂದಿ ಹಚ್ಚಬೇಕು.

೧೪. ತಡರಾತ್ರಿ ವರೆಗೆ ಜಾಗರಣೆ ಮಾಡುವುದು ಮತ್ತು ಬೆಳಗ್ಗೆ ಸೂರ್ಯೋದಯದ ನಂತರವೂ ಮಲಗಿರುವುದನ್ನು ತಡೆಯಬೇಕು.

– ವೈದ್ಯ ಮೇಘರಾಜ ಪರಾಡಕರ, ಗೋವಾ

ಅಧಾರ : ಸಾಪ್ತಾಹಿಕ ಸನಾತನ ಪ್ರಭಾತ

Leave a Comment