ಆಝಾದ ಹಿಂದ್ ಸೇನಾ !

ಆಝಾದ ಹಿಂದ್ ಸೇನೆ ಸ್ಥಾಪನೆಯ ದಿನದ ನಿಮಿತ್ತ…..

ಇಂದು ಆಝಾದ ಹಿಂದ್ ಸೇನೆ ಸ್ಥಾಪನೆಯ ದಿನವಾಗಿದೆ. ಬ್ರಿಟೀಶರ ವಿರುದ್ಧ ಹೋರಾಡುವ ಸಲುವಾಗಿ ನೇತಾಜಿ ಸುಭಾಷಚಂದ್ರ ಬೋಸ್ ಇವರು ೪೦ ಸಾವಿರ ಭಾರತೀಯ ಸ್ತ್ರೀ-ಪುರುಷರ ಸಹಭಾಗದಿಂದ ‘ಆಝಾದ ಹಿಂದ್ ಸೇನಾ’ ಸ್ಥಾಪಿಸಿದರು ಹಾಗೂ ‘ತುಮ್ ಮುಝೆ ಖೂನ್ ದೋ, ಮೈ ತುಮ್ಹೆ ಆಝಾದಿ ದೂಂಗಾ’ (ನೀವು ರಕ್ತಕೊಟ್ಟರೆ, ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ) ಎಂದು ಆಹ್ವಾನಿಸಿದರು.

ಜಲಿಯಾನವಾಲಾ ಬಾಗ್ ಹತ್ಯಾಕಾಂಡ ಮತ್ತು ಆದಾಯ ಇಲಾಖೆಯಿಂದ ಪದತ್ಯಾಗ

೨೩.೧.೧೮೮೭ ರಂದು ಕಟಕ ನಗರದಲ್ಲಿ ವಕೀಲ ಜಾನಕೀ ದಾಸ ಬೋಸ್ ಎಂಬವರ ಮನೆಯಲ್ಲಿ ಸುಭಾಷಚಂದ್ರ ಬೋಸ್ ಇವರ ಜನ್ಮವಾಯಿತು. ತಂದೆ-ತಾಯಿಯರ ಇಚ್ಛೆಯನ್ನು ಮನ್ನಿಸಿ ಸುಭಾಷ್ಚಂದ್ರ ಬೋಸ್ ೧೯೨೦ ರಲ್ಲಿ ಭಾರತೀಯ ಆದಾಯ ಸೇವೆಯ ಪರೀಕ್ಷೆಯನ್ನು ಎದುರಿಸಿ ನಾಲ್ಕನೇ ಸ್ಥಾನದಲ್ಲಿ ಉತ್ತೀರ್ಣರಾದ ಮೇಲೆ ಆ ಸೇವೆಯನ್ನು ಸ್ವೀಕರಿಸಿದರು. ಆದರೆ ಭಾರತದಲ್ಲಿ ನಡೆಯುತ್ತಿರುವ ಘಟನೆಗಳಿಂದಾಗಿ, ವಿಶೇಷವಾಗಿ ಜಲಿಯಾನ್‌ವಾಲಾ ಬಾಗ್ ಹತ್ಯಾಕಾಂಡದಂತಹ ಘಟನೆಗಳಿಂದಾಗಿ ಸುಭಾಷಚಂದ್ರ ಬೋಸ್ ಚಿಂತಾಕ್ರಾಂತರಾಗಿದ್ದರು. ಅವರು ೧೯೨೧ ರಲ್ಲಿ ಈ ಆದಾಯ ಸೇವೆಗೆ ರಾಜೀನಾಮೆ ನೀಡಿದರು.

ಜರ್ಮನಿಗೆ ಪಯಣ ಮತ್ತು ‘ರೆಡಿಯೋ’ ಸಂದೇಶಗಳು

ಬ್ರಿಟೀಶರು ಗೃಹಬಂಧನದಲ್ಲಿಟ್ಟಿದ್ದ ಸುಭಾಷಚಂದ್ರ ಬೋಸ್ ೨೬.೧.೧೯೪೧ ರಂದು ಬ್ರಿಟಿಷರ ಕಣ್ಣು ತಪ್ಪಿಸಿ ಅದೃಶ್ಯರಾದರು. ಅವರು ಕಾಬೂಲ, ಮಾಸ್ಕೋ ಮಾರ್ಗವಾಗಿ ಜರ್ಮನಿಯನ್ನು ತಲುಪಿದರು. ಆಂಗ್ಲ, ಹಿಂದಿ, ಬಂಗಾಲಿ, ತೆಲುಗು, ಗುಜರಾತಿ ಮತ್ತು ಪಶ್ತೊ ಇತ್ಯಾದಿ ಭಾಷೆಗಳಲ್ಲಿ ಅವರು ನಿಯಮಿತವಾಗಿ ‘ರೆಡಿಯೋ’ ಸಂದೇಶಗಳನ್ನು ಪ್ರಸಾರ ಮಾಡಿದರು. ದಕ್ಷಿಣ ಏಶಿಯಾದ ಜಪಾನಿನ ಆಕ್ರಮಣದ ನಂತರ ಒಂದುವರೆ ವರ್ಷಗಳಲ್ಲಿ ಅವರು ಜರ್ಮನಿಯನ್ನು ಬಿಟ್ಟರು. ಜರ್ಮನ್ ಮತ್ತು ಜಪಾನಿ ಹಡಗುಗಳಲ್ಲಿ ಪ್ರಯಾಣ ಮಾಡಿ ಅವರು ಮೆ ೧೯೪೩ ರಲ್ಲಿ ಟೊಕಿಯೋ ತಲುಪಿದರು.

‘ಆಝಾದ ಹಿಂದ್ ಸೇನಾ’ ಸ್ಥಾಪನೆ

೪ ಜುಲೈಗೆ ಅವರು ಪೂರ್ವ ಏಶಿಯಾದ ಭಾರತೀಯ ಸ್ವಾತಂತ್ರ್ಯ ಹೋರಾಟದ ನೇತೃತ್ವವನ್ನು ಸ್ವೀಕರಿಸಿದರು. ಜಪಾನಿನ ಸಹಾಯದಿಂದ ಜುಲೈ ೫ ರಂದು ಅವರು ೪೦ ಸಾವಿರ ಭಾರತೀಯ ಸ್ತ್ರೀ-ಪುರುಷರ ಸಹಭಾಗವಿರುವ ‘ಆಝಾದ ಹಿಂದ್ ಸೇನಾ’ ಸ್ಥಾಪಿಸಿದರು. ಅಕ್ಟೊಬರ ೨೧ ರಂದು ಅವರು ಹಂಗಾಮಿ ಭಾರತೀಯ ಸರಕಾರವನ್ನು ಸ್ಥಾಪಿಸಿದರು. ‘ಆಝಾದ ಹಿಂದ್ ಸೇನಾ’ ಜಪಾನಿ ಸೈನ್ಯದ ಜೊತೆ ಸೇರಿ ರಂಗೂನ (ಇಂದಿನ ಮಯನ್ಮಾರ್ ನಲ್ಲಿರುವ ಪ್ರಾಂತ್ಯ) ಮಾರ್ಗದಲ್ಲಿ ಭಾರತದತ್ತ ಪ್ರಯಾಣ ಬೆಳೆಸಿತು. ೧೮.೩.೧೯೪೪ ರಂದುಸೇನೆ ಭಾರತದ ಭೂಮಿಯಲ್ಲಿ ಕಾಲೂರಿತು‘ತುಮ್ ಮುಝೆ ಖೂನ್ ದೋ, ಮೈ ತುಮ್ಹೆ ಆಜಾದಿ ದೂಂಗಾ’ ಹಾಗೂ ‘ಚಲೋ ದಿಲ್ಲಿ’ ಎಂಬುದು ಅವರ ಘೋಷಣೆಯಾಗಿತ್ತು. ‘ಜೈ ಹಿಂದ್’, ಇದು ಅವರ ಯುದ್ಧಘೋಷಣೆಯಾಗಿತ್ತು.

(ಆಧಾರ: ದೈನಿಕ ‘ನವಪ್ರಭಾ’)

ಆಝಾದ ಹಿಂದ್ ಸೇನಾ ಅತ್ಯಂತ ಜನಪ್ರಿಯವಾಗುವುದು

೧೯೪೫ ರಲ್ಲಿ ಜರ್ಮನಿ ಮತ್ತು ಜಪಾನ ಇವುಗಳ ಪರಾಭವವಾಯಿತು. ಆಝಾದ ಹಿಂದ್ ಸೇನೆಯ ಸೈನಿಕರು ಸೆರೆಹಿಡಿಯಲ್ಪಟ್ಟರು. ಅವರ ಮೇಲೆ ೧೯೪೬ ರಲ್ಲಿ ಮೊಕದ್ದಮೆ ಹೂಡಲಾಯಿತು. ಆಗ ‘ಆಝಾದ ಹಿಂದ್ ಸೇನಾ’ ಅತ್ಯಂತ ಜನಪ್ರಿಯವಾಯಿತು. ಸುಭಾಷಚಂದ್ರ ಬೋಸ್ ಇವರ ಛಾಯಾಚಿತ್ರ ಪ್ರತಿಯೊಂದು ಮನೆಯಲ್ಲಿ ಹಚ್ಚಲಾಯಿತು.

ಬ್ರಿಟೀಶ ಸೈನ್ಯದಲ್ಲಿ ಬಂಡಾಯ

೧೯೪೬ ರಲ್ಲಿ ‘ರೋಯಲ್ ಇಂಡಿಯನ್ ನೇವಿ’ ಮತ್ತು ‘ರೋಯಲ್ ಇಂಡಿಯನ್ ಏರ್ ಫೋರ್ಸ್’ ಸೈನಿಕರು ಬಂಡಾಯ ಹೂಡಿದರು. ಬ್ರಿಟೀಶ್ ಸರಕಾರ ಮಾಡಿದ ಗುಪ್ತ ವಿಚಾರಣೆಯಲ್ಲಿ ಅವರಿಗೆ ತಿಳಿಯಿತೇನೆಂದರೆ, ಬ್ರಿಟೀಶ ಸರಕಾರದ ಹೆಚ್ಚಿನಾಂಶ ಭಾರತೀಯ ಸೈನಿಕರಿಗೆ ‘ಆಝಾದ ಹಿಂದ್ ಸೇನಾ’ ವಿಷಯದಲ್ಲಿ ಸಹಾನುಭೂತಿ ಇದೆ ಹಾಗೂ ಅವರ ವಿರುದ್ಧ ನಡೆಯುತ್ತಿರುವ ಮೊಕದ್ದಮೆಗೆ ಅವರ ವಿರೋಧವಿದೆ ಎಂದು. ಆಂಗ್ಲರು ಯಾವ ಸೈನಿಕರ ಆಧಾರದಿಂದ ಭಾರತದಲ್ಲಿ ಆಡಳಿತ ನಡೆಸಲು ನೋಡುತ್ತಿದ್ದರೋ, ಅವರೇ ಈಗ ಸಹಕರಿಸುವುದಿಲ್ಲ ಎಂದು ತಿಳಿದಾಗ ಬ್ರಿಟೀಶರಿಗೆ ಈಗ ಯಾವುದೇ ಪರ್ಯಾಯ ಉಳಿದಿರಲಿಲ್ಲ; ಆದ್ದರಿಂದ ಅವರು ತಮ್ಮ ತಟ್ಟೆಲೋಟಗಳನ್ನು ಎತ್ತಿಕೊಂಡು ಹೋಗುವ ಸಿದ್ಧತೆ ಮಾಡಿದರು.

– ಜಿತೇಂದ್ರ ಜೋಶಿ (ಅಭಯ ಭಾರತ, ಅಗಸ್ಟ್ ೧೫ ರಿಂದ ಸಪ್ಟೆಂಬರ್ ೧೧೧೪ ೨೦೦೯)