ದೇವನಹಳ್ಳಿ ಕೋಟೆ


ದೇವನಹಳ್ಳಿ ಕೋಟೆಯು ಬೆಂಗಳೂರಿನಿಂದ ಸುಮಾರು ೩೫ ಕಿ.ಮೀ ದೂರದಲ್ಲಿದೆ. ಇದನ್ನು ಮಲ್ಲಬೈರೇಗೌಡ ಎಂಬ ರಾಜನು ಕಟ್ಟಿಸಿದನು. ೧೫ನೇ ಶತಮಾನದಲ್ಲಿ ಕಂಚಿಯಿಂದ ಅಲೆಮಾರಿಗಳಾಗಿ ಬಂದ ಒಂದು ಕುಟುಂಬದವರು ರಾಮಸ್ವಾಮಿ ಬೆಟ್ಟದಡಿಯಲ್ಲಿ ತಮ್ಮ ಡೇರೆಯನ್ನು ಹಾಕಿದ್ದರು. ಅವರ ನಾಯಕನಾಗಿದ್ದ ರಣ ಬೈರೇಗೌಡನಿಗೆ ಕನಸಿನಲ್ಲಿ ಅಲ್ಲಿಯೇ ಸಮೀಪದಲ್ಲಿದ್ದ ಹಳ್ಳಿಗೆ ಹೋಗಬೇಕೆಂದು ನಿರ್ದೇಶನವಾಯಿತು. ಅಲ್ಲಿಯೇ ರಣ ಬೈರೇಗೌಡನ ಮಗನಾದ ಮಲ್ಲಬೈರೇಗೌಡನು ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರವನ್ನು ಶೋಧಿಸಿದನು. ಈ ಕೋಟೆಯಲ್ಲಿ ವೇಣುಗೋಪಾಲಸ್ವಾಮಿ ದೇವಸ್ಥಾನವಿದೆ.